Wednesday, November 4, 2015

ತೂಗುದೀಪ

ನಮ್ಮದೆಲ್ಲ ಇಷ್ಟೇ. ಏನೋ ಫ಼ೀಲಿಂಗು ಆದಾಗ ನಾಲ್ಕು ಸಾಲು ಗೀಚುವುದು. ಅದನ್ನು ಫ಼ೇಸ್ ಬುಕ್ಕಲ್ಲಿ ಅಪ್ ಲೋಡ್ ಮಾಡಿ ಬರುವ ಲೈಕುಗಳ(ನಾಲ್ಕಾರು) ಎಣಿಸುವುದು. ಅಂತೆಲ್ಲ ಅಂದುಕೊಂಡಿದ್ದವನ ಬಳಿ ನಂದೊಂದು ಕವನ ಸಂಕಲನ ಬರ್ತಾ ಇದೆ ;ಮುಸುಕು ತೆರೆದು’ ಅಂತ  ಗೆಳೆಯ,ಹಿರಿಯ ರವೀಂದ್ರ ಅಂದಾಗ , ನನಗನಿಸಿದ್ದು " ಯಾರು ಓದ್ತಾರೆ ಮಾರ್ರೆ? ಕೈ ಸುಟ್ಟುಕೊಳ್ಳುವ ವ್ಯವಹಾರ. ಅದಲ್ಲದೆ ಕವಿತೆ ಯಪ್ಪಾ ಥೂ.ಕವಿತೆಗಳ ಬರೆಯುವ ಮುಖ್ಯ ಉದ್ದೇಶ ಒಂದು ಹೆಣ್ಣು ಜೀವದ ಎದೆಯಲ್ಲಿ ಇಂಬೆಲಾ ಒಂಜಿ ನರಮಾನಿ" ಅನ್ನೋ ಫ಼ೀಲಿಂಗ್ ಹುಟ್ಟುಹಾಕುವುದು.ಇವರಿಗೆ ಮದ್ವೆ ಆಗಿದೆ.ಸುಮ್ನೆ ಇರೋದು ಬಿಟ್ಟು" ಇತ್ಯಾದಿ. ಇ

ವರೂ , ಗೆಳೆಯ ಗುರುಪ್ರಸಾದರೂ ತಲಾ ಒಂದೊಂದು ಕವಿತಾ ಸಂಕಲನ ತಂದ ಮೇಲೂ, ನನ್ನ ಅಭಿಪ್ರಾಯವೇನು ಬದಲಾಗಿರಲಿಲ್ಲ. ಆದರೆ ಅವರ ಬಗ್ಗೆ ಮತ್ತು ಇಂತಹ ಕೆಲಸಗಳಿಗೆ ಒತ್ತಾಸೆಯಾಗಿ ನಿಂತ ಕರುಣಾಕರರ ಮೇಲೂ ಭಯಂಕರ ರೆಸ್ಪೆಕ್ಟು ಬೆಳೆಯಿತು.  ನಗುವವರ ಮುಂದೆ ’ದೆತೊಣು ಕುಡೊಂಜಿ ವಿಷಯ ತೆಲಿಪ್ಪೆರ ’ ಅಂತಾನೋ, ’ ಮುಕ್ಲೇಗ್ ಮರ್ಲಿಯಾ" ಅಂತಾನೋ ಬಂದ ವ್ಯಂಗ್ಯಗಳಿಗೆ ತಲೆಕೆಡಿಸಿಕೊಳ್ಳದೆ ಪ್ರಕಟನೆಗೆ ಹೊರಟರಲ್ಲ ಅದು ಸಾಧನೆ. ಆಮೇಲೆ ನಮ್ಮಂತಹ ನಾಲ್ಕಾರು ಹಣೆಪಟ್ಟಿಯವರ ಒಟ್ಟು ಹಾಕಿ ಒಂದು ಸಂಕಲನವೂ ತಂದಿದ್ದಾಯ್ತು.
ಇವೆಲ್ಲ ನೆನಪಾದದ್ದು ಮೊನ್ನೆ ರವೀಂದ್ರ ಎರಡನೇ ಕವನ ಸಂಕಲನ ’ತೂಗುದೀಪ’ ಬಿಡುಗಡೆಯಾದಾಗ! ವೈಯಕ್ತಿಕವಾಗಿ ನನಗೆ ಇಷ್ಟವಾದ ಕವಿತೆಗಳಿರುವ ಈ ಸಂಕಲನ ನಿಮಗೂ ಇಷ್ಟವಾದೀತು

1 comment: